ಭಗವದ್ಭಕ್ತಿ

ಭಗವದ್ಭಕ್ತಿಯ ಪಡೆಯಲುಬೇಕು
ಬಾಳನು ಸಫಲ ಮಾಡಲುಬೇಕು
ಇಹ ಸುಖ ವಿಷಯ ರಾಗ ಬಿಡಬೇಕು
ಆಧ್ಯಾತ್ಮ ಆನಂದ ಹೊಂದಲೆಬೇಕು

ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ
ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ
ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ
ಇಷ್ಟ ದೇವರಿಗೆ ಸದಾ ಸ್ಮರಣೆ ಇರಲಿ

ಹೋಮಾ ಪಕ್ಷಿ ಗಗನದಲ್ಲಿರುವಾಗಲೆ
ಸಂತತಿ ಮೊಟ್ಟೆ ತಾನು ಇಡುವಾಗಲೆ
ಭೂಮಿಗೆ ಜಾರುತ್ತಿರುವಂತೆ ಮರಿಯಾಗ್ವುದು
ಆ ಮರಿಯೇ ಆಕಾಶದತ್ತ ಹೋಗುವುದು

ಹೋಮಾ ಪಕ್ಷಿಯಂದದಿ ಮನುಜನಿರಬೇಕು
ಹುಟ್ಟುತ್ತಲೆ ಪರಮಾತ್ಮಗೆ ಧ್ಯಾನಿಸಬೇಕು
ಮನಸ್ಸು ಮೂಲೆಯಲ್ಲೂ ಭವ ರಂದ್ರವಿರಬಾರದು
ನೀನು ಗಳಿಸಿದ ಪುಣ್ಯ ಅಲ್ಲಿ ಸೋರಿಹೋಗ್ವುದು

ಸುಟ್ಟ ಹಗ್ಗದ ಹಾಣೆ ಅಹಂಕಾರ ವಿರಲಿ
ಗಾಳಿ ಬಿಟ್ಟರೆ ದರ್ಪ ಹಾರಿ ಹೋಗಿರಲಿ
ದೇವರ ಕೃಪೆಗಾಗಿ ಮನವು ಹಾತೊರೆಯಲಿ
ಮಾಣಿಕ್ಯ ವಿಠಲನಾಗಿ ಸಾರ್ಥಕ ಎನಿಸಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೦
Next post ನಿನ್ನ ನೀನು ನಡೆಯೇ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys